ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆಯಂತೆ ಅಧಿಕಾರಿ ಪಡೆ ರೂಪುರೇಷೆ ತಯಾರಿಸಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಹಾದಿಯುದ್ದಕ್ಕೂ ಕನಿಷ್ಠ ಅರ್ಧ ಕಿಲೋ ಮೀಟರ್ಗೆ ಒಂದರಂತೆ ಫೀಡಿಂಗ್ ಸೆಂಟರ್ ಇರುವಂತೆ ನೋಡಿಕೊಳ್ಳಲು ಯೋಜಿಸಿದೆ. ಇದರಿಂದ, ವಿವಿಧೆಡೆಯಿಂದ ಬರುವ ಮಕ್ಕಳ ತಾಯಂದಿರು ನಿರಾತಂಕವಾಗಿ ದಸರೆಯನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಿತಿಯ ಆಶಯವೂ ಆಗಿದೆ.