ಅಲ್ಲದೇ, ಕಪಿಲಾ ನದಿ ಪ್ರವಾಹದಿಂದಾಗಿ ನಗರ್ಲೆ, ಬಿಳಿಗೆರೆ, ಸರಗೂರು ಭಾಗದ ಭತ್ತ ಗದ್ದೆಗೆ ನೀರು ನುಗ್ಗಿ ಅಪಾರ ಹಾನಿಯಾಗಿತ್ತು. ಅವರಿಗೂ ಈಗ ದ್ವಿದಳ ಧಾನ್ಯಗಳು ಆಸರೆಯಾಗಿವೆ. ಕಳೆದ ವರ್ಷ ಏಪ್ರಿಲ್ನಿಂದ ಜೂನ್ ವರಗೆ 290 ಮಿ.ಮಿ ಮಳೆಯಾದರೆ ಈ ಅವಧಿಯಲ್ಲಿ 437 ಮಿ.ಮಿ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡು ರೈತರಲ್ಲಿ ಹರ್ಷ ಮೂಡಿಸಿದೆ. ಅಲ್ಲದೇ, ಫಸಲು ಸಹ ಉತ್ತಮವಾಗಿ ಬಂದಿದೆ ಎನ್ನುತ್ತಾರೆ ಇಲ್ಲಿನ ರೈತರು.