ಮೈಸೂರು: ಚಾಮುಂಡಿಬೆಟ್ಟದ ಅರಣ್ಯದಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡು, ಸುಮಾರು ಅರ್ಧ ಎಕರೆಯಷ್ಟು ಪ್ರದೇಶದ ಹುಲ್ಲು ಭಸ್ಮಗೊಂಡಿದೆ.
ಉತ್ತನಹಳ್ಳಿ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕ್ರಮೇಣ ಬೆಟ್ಟಕ್ಕೆ ಹಬ್ಬಿತು.ಎರಡುಅಗ್ನಿಶಾಮಕ ವಾಹನಗಳ ಮೂಲಕಬೆಂಕಿಯನ್ನು ನಿಯಂತ್ರಿಸಲಾಯಿತು.
‘ಗಾಳಿಯ ಬೀಸುವಿಕೆ ಕಡಿಮೆ ಇತ್ತು. ಬೆಂಕಿ ನಂದಿಸಲು ಸುಲಭವಾಗಿ ತೆರಳಬಹುದಾದ ಮಾರ್ಗವೂ ಇತ್ತು. ಹೀಗಾಗಿ, ಬೆಂಕಿಯು ಸುಲಭದಲ್ಲಿ ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ತಿಳಿಸಿದರು.