ಮೈಸೂರು: ಅವಧಿ ಮುಗಿದ ಬಳಿಕವೂ ಮದ್ಯ ಮಾರಾಟ ಮಾಡಿ, ಸೇವನೆಗೆ ಅವಕಾಶ ಮಾಡಿಕೊಟ್ಟ ನಾಲ್ವರನ್ನು ಬಂಧಿಸಿ, ಬಾರ್ ವಿರುದ್ಧ ಸಿಸಿಬಿ ಪೊಲೀಸರು ಕಾನೂನು ಕ್ರಮ ಜಾರಿಗೊಳಿಸಿದ್ದಾರೆ.
ನಗರದ ಕಾಳಿದಾಸ ರಸ್ತೆಯಲ್ಲಿರುವ ಲಾಸ್ಟ್ ಅಂಡ್ ಫೌಂಡ್ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮ್ಯಾನೇಜರ್ ಸ್ವಾಮಿ, ಸಪ್ಲೈಯರ್ಗಳಾದ ವೇಣುಗೋಪಾಲ್, ಕೆಕೋತೋ, ಶಿವು ಎಂಬುವರನ್ನು ಬಂಧಿಸಿದ್ದಾರೆ ಎಂದು ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸರು ತಿಳಿಸಿದ್ದಾರೆ.
ಮರ ಕಡಿತ: ದಂಡ
ಮೈಸೂರು: ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದ ಮುಸ್ಲಿಂ ಸಮಾಜದ ಸರ್ಕಾರಿ ಸ್ಮಶಾನದಲ್ಲಿನ ಮರಗಳನ್ನು ಅನುಮತಿ ಪಡೆಯದೆ ಕಡಿದವರಿಗೆ, ಅರಣ್ಯ ಇಲಾಖೆ ದಂಡ ವಿಧಿಸಿ, ಆದೇಶ ಹೊರಡಿಸಿದೆ.
ಗರ್ಗೇಶ್ವರಿಯ ಜಾಮೀಯಾ ಮಸೀದಿಯ ಆಡಳಿತ ಮಂಡಳಿಯ ಆರು ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದು, ₹ 2.52 ಲಕ್ಷ ದಂಡ ವಿಧಿಸಿದೆ.