ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಜಾಗೃತಿ ಮೂಡಿಸುವ ಶ್ಯಾಮಸುಂದರ್

ಸುಸ್ಥಿರ ತಂತ್ರಜ್ಞಾನ ಬಳಸಿ ಪರಿಸರ ಉಳಿಸುವಂತೆ ಶ್ರಮಿಸುವ ಪ್ರಾಧ್ಯಾಪಕ
Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ (ಎನ್‌ಐಇ) ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಪ್ರಾಧ್ಯಾಪಕ ಎಸ್‌.ಶ್ಯಾಮಸುಂದರ್‌ ಅವರು ನವೀಕರಿಸಬಲ್ಲ ಇಂಧನ ಹಾಗೂ ಸುಸ್ಥಿರ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಜಾಗೃತಿ, ಅರಿವು ಮೂಡಿಸುತ್ತಿದ್ದಾರೆ. ಇವರದು ಮಾತಿನ ಅರಿವಲ್ಲ; ಬದಲಿಗೆ, ಪ್ರಾಯೋಗಿಕವಾಗಿ ಸಾಬೀತು ಮಾಡುವ ಸಂಕಲ್ಪ.

ಕಾಲೇಜಿನ ಆವರಣದಲ್ಲೇ ಸ್ಥಾಪಿಸಿರುವ ನವೀಕರಿಸಬಲ್ಲ ಇಂಧನ ಹಾಗೂ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿವಿಧ ಬಗೆಯ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ತಿಳಿಯಪಡಿಸಲೆಂದೇ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದಾರೆ. ಸೌರಶಕ್ತಿಯನ್ನು ಬಳಸಿಕೊಂಡು ಅಡುಗೆ ಮಾಡುವ ಒಲೆ, ಅಡುಗೆ ಮನೆ ತ್ಯಾಜ್ಯದಿಂದ ಅನಿಲ ತಯಾರಿಸುವ ಘಟಕ– ಹೀಗೆ ವಿವಿಧ ಬಗೆಯ ತಂತ್ರಜ್ಞಾನಗಳ ಪ್ರದರ್ಶನ ಇಲ್ಲಿದೆ.‌

ಪ್ರದರ್ಶನದಿಂದ ಆರಂಭಗೊಂಡ ಇವರ ಪರಿಸರ ಅರಿವಿನ ಕಾರ್ಯ, ಬಳಿಕ ಪ್ರಾಯೋಗಿಕ ಅಳವಡಿಕೆಯತ್ತ ಹೊರಳಿಕೊಂಡಿತು. ಆಡಳಿತ ತರಬೇತಿ ಸಂಸ್ಥೆ, ಚಾಮರಾಜೇಂದ್ರ ಮೃಗಾಲಯ, ಅಂಚೆ ತರಬೇತಿ ಸಂಸ್ಥೆ, ಚಾಮುಂಡಿ ಬೆಟ್ಟದ ದಾಸೋಹ ಭವನ, ಎನ್‌ಐಇ ಕ್ಯಾಂಟೀನ್, ವಿವಿಧ ಶಿಕ್ಷಣ ಸಂಸ್ಥೆಗಳು ಸೇರಿದಂತೆ, 100 ಮನೆಗಳಿಗೆ ಅಡುಗೆ ತ್ಯಾಜ್ಯ ಜೈವಿಕ ಅನಿಲ ಸ್ಥಾವರ ಅಳವಡಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

‘ಸಮರ್ಥ ಇಂಧನ ವ್ಯರ್ಥವಾಗಬಾರದು. ಬದಲಿಗೆ ಅದು ಪುನರ್ಬಳಕೆ ಆಗಬೇಕು. ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಾಗುವುದು’ ಎನ್ನುವುದು ಪ್ರೊ.ಶ್ಯಾಮಸುಂದರ್‌ ಅವರ ಮನದಾಳದ
ಆಶಯ.

ಜತೆಗೆ, ಇವರು ಬಯೊ ಡೀಸೆಲ್‌ ಉತ್ಪಾದನೆ ಬಗ್ಗೆಯೂ ಶ್ರಮಿಸಿದ್ದಾರೆ. ಈಚೆಗಷ್ಟೇ ನಗರದ ನಳಪಾಕ್ ಹೋಟೆಲಿನಲ್ಲಿ ಘಟಕ ಸ್ಥಾಪಿಸಿದ್ದು, ದಿನಕ್ಕೆ 200 ಲೀಟರ್‌ ಬಳಸಿದ ಅಡುಗೆ ಎಣ್ಣೆಯಿಂದ ಇಂಧನ ತಯಾರಿಸಲಾಗುತ್ತಿದೆ.

ಅಂತೆಯೇ, ಕಡಿಮೆ ವೆಚ್ಚದಲ್ಲಿ ನಿರ್ಮಿಸಬಲ್ಲ ಪರಿಸರ ಪ್ರಿಯ ಮನೆಗಳ ನಿರ್ಮಾಣದ ಬಗ್ಗೆಯೂ ಇವರು ಸಾಕಷ್ಟು ಶ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT