ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ, ಕಬ್ಬು, ಬೆಲ್ಲ, ವಿವಿಧ ಫಲ ನೀಡಿದರು. ಬಳಿಕ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತ ವತಿಯಿಂದ ಮಾವುತರು, ಕವಾಡಿಗರಿಗೆ ವಸ್ತ್ರ ಹಾಗೂ ತಲಾ ₹ 8,500 ಗೌರವಧನ ನೀಡಿ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು.