ಇವರ ‘ಸತ್ಯ ಹರಿಶ್ಚಂದ್ರ’ ನಾಟಕ 100ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಜತೆಗೆ, ಎಚ್ಚೆಮ್ಮನಾಯಕ, ಕುರುಕ್ಷೇತ್ರ, ಶನಿಪ್ರಭಾವ, ದಾನಶೂರಕರ್ಣ, ಮುದುಕನಮದುವೆ, ಚನ್ನಪ್ಪಚನ್ನೇಗೌಡ, ಸೊಸೆ ತಂದ ಸೌಭಾಗ್ಯ ಹೀಗೆ ಹಲವು ಹತ್ತು ನಾಟಕಗಳನ್ನು ನಿರ್ದೇಶಿಸುವ ಮೂಲಕ ತಾಲ್ಲೂಕಿನ ರಂಗ ಕಲಾವಿದರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.