ಘಟನೆ ವಿವರ:ನಂಜನಗೂಡು ತಾಲ್ಲೂಕಿನ ದೇವಾಲಯವೊಂದರ ಗುಡ್ಡಪ್ಪ ವೆಂಕಟೇಶ್ನಾಯಕ ಗೃಹಿಣಿಯೊಬ್ಬರಿಗೆ ಮಕ್ಕಳಾಗುವಂತಹ ವರ ನೀಡುತ್ತೇನೆ ಎಂದು ನಂಬಿಸಿದ್ದ. ನಂತರ, ‘ಧರ್ಮಸ್ಥಳಕ್ಕೆ ನನ್ನ ಜತೆಗೆ ಬಂದರೆ ಮಕ್ಕಳಾಗುತ್ತವೆ’ ಎಂದು ಹೇಳಿದ. ಈ ವಿಷಯವನ್ನು ಗೃಹಿಣಿ ಪತಿಯ ಗಮನಕ್ಕೆ ತಂದರು. ದೂರವಾಣಿ ಕರೆ ಮಾಡಿ ಮನೆಗೆ ಕರೆಸಿಕೊಂಡ ಪತಿ ಮತ್ತು ಗ್ರಾಮಸ್ಥರು ಕೋಣೆಯೊಂದರಲ್ಲಿ ಕೂಡಿ ಹಾಕಿ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.