ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಾಗುವಂತ ವರ ನೀಡುವೆ ಎಂದವನಿಗೆ ‘ಗೃಹಬಂಧನ’!

Last Updated 20 ಮೇ 2019, 20:12 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳಾಗುವಂತಹ ವರ ನೀಡುತ್ತೇನೆ’ ಎಂದು ನಂಬಿಸುತ್ತಿದ್ದ ದೇವರ ಗುಡ್ಡಪ್ಪನೊಬ್ಬನನ್ನು ತಾಲ್ಲೂಕಿನ ಗ್ರಾಮವೊಂದರ ಜನರು ಸೋಮವಾರ ಮನೆಯಲ್ಲಿ ಕೂಡಿ ಹಾಕಿ ದಿಗ್ಬಂಧನ ವಿಧಿಸಿದರು.

ಸ್ಥಳಕ್ಕೆ ಬಂದ ಜಯಪುರ ಠಾಣೆ ಪೊಲೀಸರು ಆರೋಪಿ ವೆಂಕಟೇಶ್‌ನಾಯಕ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಘಟನೆ ವಿವರ:ನಂಜನಗೂಡು ತಾಲ್ಲೂಕಿನ ದೇವಾಲಯವೊಂದರ ಗುಡ್ಡಪ್ಪ ವೆಂಕಟೇಶ್‌ನಾಯಕ ಗೃಹಿಣಿಯೊಬ್ಬರಿಗೆ ಮಕ್ಕಳಾಗುವಂತಹ ವರ ನೀಡುತ್ತೇನೆ ಎಂದು ನಂಬಿಸಿದ್ದ. ನಂತರ, ‘ಧರ್ಮಸ್ಥಳಕ್ಕೆ ನನ್ನ ಜತೆಗೆ ಬಂದರೆ ಮಕ್ಕಳಾಗುತ್ತವೆ’ ಎಂದು ಹೇಳಿದ. ಈ ವಿಷಯವನ್ನು ಗೃಹಿಣಿ ಪತಿಯ ಗಮನಕ್ಕೆ ತಂದರು. ದೂರವಾಣಿ ಕರೆ ಮಾಡಿ ಮನೆಗೆ ಕರೆಸಿಕೊಂಡ ಪತಿ ಮತ್ತು ಗ್ರಾಮಸ್ಥರು ಕೋಣೆಯೊಂದರಲ್ಲಿ ಕೂಡಿ ಹಾಕಿ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.

ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಜಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT