ಹೀಗಿದ್ದೂ, ಸತೀಶ್ ಗೌಡ ಅವರಿಗೆ ಬಂದೂಕು ಪರವಾನಗಿ ನೀಡಿರುವ ಕುರಿತು ಅನುಮಾನಗೊಂಡ ಕಮಿಷನರ್, ತನಿಖೆಗೆ ಆದೇಶಿದ್ದರು. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಸತೀಶ್ ಗೌಡ ಶೂಟ್ ಔಟ್ ಪ್ರಕರಣಕ್ಕೂ ಹಿಂದೆಯೇ ಬಂದೂಕು ಪರವಾನಗಿ ಪಡೆದಿದ್ದರು. ಆದರೆ, ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕವೂ, ಸತೀಶ್ ಗೌಡ ಕುವೆಂಪುನಗರ ಪೊಲೀಸ್ ಠಾಣೆಗೆ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರವಾನಗಿ ನವೀಕರಣಗೊಂಡಿರುವುದು ಪತ್ತೆಯಾಗಿದೆ.