ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತದೆ. ದೆಹಲಿಯ ನಾಯಕರು ಹೇಳಿದಂತೆ ನಡೆಯುವುದು ಮೊದಲಿಂದಲೂ ಇರುವ ಪರಿಪಾಠ. ನಾನು ಕೂಡಾ ದೆಹಲಿ ನಾಯಕರ ಮಾತನ್ನು ಮೀರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಆಡಳಿತ, ಜನರ ಹಿತದೃಷ್ಟಿಯಿಂದ ಅಧಿಕಾರ ಬಿಟ್ಟುಕೊಡಲು ಸಿದ್ದವಿದ್ದೇನೆ ಎಂದಿರುವುದನ್ನು ನಾಡಿನ ಜನರೂ ಸ್ವಾಗತಿಸುತ್ತಾರೆ’ ಎಂದರು.