ಬೆಳಿಗ್ಗೆ 6 ಗಂಟೆಗೆ ದೇವೇಗೌಡ ದಂಪತಿ ದೇವಸ್ಥಾನಕ್ಕೆ ಬಂದರು. ಈ ವೇಳೆ, ಸ್ವಾಮಿಗೆ ಅಭಿಷೇಕ ನಡೆಯುತ್ತಿತ್ತು. ಇದರಿಂದ ದೇವಾಲಯದ ಪ್ರಾಂಗಣದಲ್ಲಿ ಅರ್ಧ ಗಂಟೆ ಕಾದು ಕುಳಿತರು. ಅಭಿಷೇಕ, ಮಹಾ ಮಂಗಳಾರತಿ ಮುಗಿದ ನಂತರ ದೇವರ ದರ್ಶನ ಪಡೆದರು. ದೇವೇಗೌಡ ದಂಪತಿಗೆ ದೇವಾಲಯದ ವತಿಯಿಂದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಲಾಯಿತು.