‘ಮೈಸೂರು ವಿಶ್ವವಿದ್ಯಾಲಯದಿಂದ ಕುಕ್ಕರಹಳ್ಳಿ ಕೆರೆ ಮಾರ್ಗ, ಕೆಆರ್ಎಸ್ ರಸ್ತೆ ಸೇರಿ 4 ಕಡೆಗಳಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಶೋಕಪುರಂ ರೈಲು ನಿಲ್ದಾಣದಿಂದ ಜೆ.ಪಿ. ನಗರ ಕಡೆಗೆ ಪ್ರಯಾಣಿಕರು ಹೆಚ್ಚು ಸಂಚರಿಸುತ್ತಾರೆ. ಅಲ್ಲೂ ಸೇತುವೆ ನಿರ್ಮಿಸಬೇಕಿದೆ’ ಎಂದು ಹೇಳಿದರು.