ಸಚಿವ ಸಾ.ರಾ.ಮಹೇಶ್ ಇಂದಿರಾ ಕ್ಯಾಂಟೀನ್ ಉದ್ಘಾಟಸಿದ ಬಳಿಕ ಮಾತನಾಡಿ ‘ಚುನಾವಣಾ ನೀತಿ ಸಂಹಿತೆಯಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗದೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಬಡವರ ಅನುಕೂಲಕ್ಕಾಗಿ ತಕ್ಷಣ ಉದ್ಘಾಟನೆಯಾಗಬೇಕು ಎನ್ನುವ ಉದ್ದೇಶದಿಂದ ಯಾವುದೇ ಆಹ್ವಾನ ಪತ್ರಿಕೆ ಮಾಡಿಸದೆ, ಶಿಷ್ಟಾಚಾರ ಉಲ್ಲಂಘನೆಯಾಗದಂತೆ, ಎಲ್ಲರನ್ನೂ ದೂರವಾಣಿ ಮೂಲಕವೇ ಮುಖ್ಯಾಧಿಕಾರಿ ಶಿವಣ್ಣ ಆಹ್ವಾನಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.