ನಾಗರಹೊಳೆ ಹುಲಿ ರಕ್ಷಿತಾರಣ್ಯದಿಂದ ನುಗು ಜಲಾಶಯಕ್ಕೆ ಬಂದಿರುವ ಈ ಆನೆಗಳು, ಕಳೆದೆರಡು ದಿನಗಳಿಂದ ಜಯಪುರದ ಹೊರವಲಯದ ಜಮೀನಿನಲ್ಲಿ ಬೀಡುಬಿಟ್ಟಿವೆ. ಹಲವು ಎಕರೆಯಷ್ಟು ಕಬ್ಬು ಹಾಗೂ ಮತ್ತಿತರ ಬೆಳೆಗಳನ್ನು ನಾಶಪಡಿಸಿವೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಆನೆಗಳನ್ನು ಓಡಿಸಲು ಯತ್ನಿಸಿದರಾದರೂ ಆನೆಗಳು ಕಾಡಿನತ್ತ ತೆರಳಲಿಲ್ಲ.