‘ನಾಡದೇವತೆ ಚಾಮುಂಡೇಶ್ವರಿ ದುಃಖ ದೂರ ಮಾಡುವ ದೇವಿ. ದುರ್ಗೆಯ ಸ್ವರೂಪ.ಪಕ್ಷ ಭೇದ ಮರೆತು ರಾಜ್ಯಕ್ಕೆ ಎಲ್ಲ ಜನರಿಗೂ ಒಳ್ಳೇದಾಗಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ಗುರುವಾರ ನಂಜುಂಡೇಶ್ವರ, ದತ್ತಾತ್ರೇಯನ ದರ್ಶನ ಮಾಡಿದೆ. ಇಂದು ಚಾಮುಂಡೇಶ್ವರಿ ದರ್ಶನ ಭಾಗ್ಯ ಸಿಕ್ಕಿದೆ. ಕಷ್ಟ ನಿವಾರಣೆ ಆಗಲಿ ಅಂತಪ್ರಾರ್ಥನೆ ಮಾಡಿಕೊಂಡೆ’ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.