ಬೆಂಗಳೂರು, ಜೂನ್ 12– ಪ್ರಿ ಯೂನಿರ್ವಸಿಟಿ ತರಗತಿಯ ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ 15 ವರ್ಷ ವಯೋಮಿತಿಯ ನಿಯಮವನ್ನು 1970ರ ತನಕ ಅಮಾನತ್ತಿನಲ್ಲಿಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ತೀರ್ಮಾನಿಸಿದೆ.
**
ಆರ್ಟ್ಸ್, ಸೈನ್ಸ್, ಕಾಮರ್ಸ್ ಡಿಗ್ರಿ ತರಗತಿಗಳಲ್ಲಿ ಕನ್ನಡ ಐಚ್ಛಿಕ ಮಾಧ್ಯಮ
ಬೆಂಗಳೂರು, ಜೂನ್ 12– 1968–69ನೇ ಸಾಲಿನಿಂದ ಬಿ.ಎ., ಬಿ.ಎಸ್ಸಿ., ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ನಿರ್ಧರಿಸಿದೆ.
**
ಈ ವರ್ಷದಿಂದ ಮೂರು ವರ್ಷದ ಲಾ ಶಿಕ್ಷಣ
ಬೆಂಗಳೂರು, ಜೂನ್ 12– ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 68–69ನೇ ಸಾಲಿನಿಂದ 3 ವರ್ಷ ಅವಧಿಯ ಲಾ ಪದವಿ ಶಿಕ್ಷಣ ಆರಂಭವಾಗುವುದು.
ಈ ಯೋಜನೆಯನ್ನು ಈ ವರ್ಷದಿಂದ ಜಾರಿಗೆ ತರಲು ಅಕೆಡೆಮಿಕ್ ಕೌನ್ಸಿಲ್ ನಿರ್ಣಯ ಮಾಡಿದೆ.
**
ಕೃಷ್ಣಾ ವಿವಾದ: ಪಂಚಾಯಿತಿಗೆ ಒಪ್ಪಿಸಲು ಕಷ್ಟವಿಲ್ಲ
ಬೆಂಗಳೂರು, ಜೂನ್ 12– ಸಂಬಂಧಪಟ್ಟ ಎಲ್ಲ ರಾಜ್ಯಗಳು ಪಂಚಾಯಿತಿ ರಚಿಸಬೇಕೆಂದು ಕೇಳಿರುವಾಗ, ಕೃಷ್ಣಾನದಿ ನೀರು ವಿವಾದದ ಇತ್ಯರ್ಥಕ್ಕೆ ಪಂಚಾಯಿತಿಯನ್ನು ನೇಮಿಸಲು ಕೇಂದ್ರಕ್ಕೆ ಕಷ್ಟವೇನೂ ಇಲ್ಲವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅಭಿಪ್ರಾಯಪಟ್ಟರು.