ಇಲ್ಲಿನ ಜೆಎಸ್ಎಸ್ ಕಾನೂನುಕಾಲೇಜಿನಲ್ಲಿಶುಕ್ರವಾರ ವಿಶೇಷ ಉಪನ್ಯಾಸ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಜಾಬ್, ಹಲಾಲ್, ಆಜಾನ್ನಂತಹ ವಿಷಯಗಳು ಹೊಸದಲ್ಲ. ಮೊದಲಿ
ನಿಂದಲೂ ಅವು ನಮ್ಮ ಜತೆಯಲ್ಲೇ ಇವೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯಗಳಲ್ಲಿ ಕಾಣದ ವಿವಾದಗಳು ಕರ್ನಾಟಕದಲ್ಲಿ ನಡೆದಿವೆ. ಕರ್ನಾಟಕದ ನೆಲ ಪ್ರಯೋಗಶಾಲೆಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅವುಗಳನ್ನು ನಿಭಾಯಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ವಿಫಲಗೊಂಡಿವೆ’ ಎಂದರು.