ಅವರೇ ಬಂದು ನೋಡಲಿ: ‘ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಬೇಕು’ ಎಂಬ ರಜನಿಕಾಂತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ರಜನಿಕಾಂತ್ ಕರ್ನಾಟಕಕ್ಕೆ ಬಂದು ಇಲ್ಲಿನ ಆಣೆಕಟ್ಟುಗಳನ್ನು ಖುದ್ದು ನೋಡಿದರೆ ನಮ್ಮ ರೈತರ ಸಂಕಷ್ಟ ಏನೆಂಬುದು ಗೊತ್ತಾಗುತ್ತದೆ. ಆಗಲೂ ನೀರು ಬೇಕು ಎಂದು ಕೇಳಿದರೆ ಕುಳಿತು ಚರ್ಚಿಸಬಹುದು’ ಎಂದರು.