ಕನ್ನಡದ ಬಗ್ಗೆಕನ್ನಡಿಗರಿಗೆ ತಾತ್ಸಾರದ ಮನೋಭಾವವಿದೆ. ಪೋಷಕರಿಗೆ, ಮಕ್ಕಳಿಗೆ, ಶಿಕ್ಷಕರಿಗೆ, ಸರ್ಕಾರಕ್ಕೆ ಕನ್ನಡ ಬೇಡವಾಗಿದೆ. ಇಂಗ್ಲಿಷ್ ಎಂಬ ಭೂತ ಮನೆಯ ಒಳಗೆ ಬಂದು ಕುಳಿತಿದೆ. ಈ ಹೊತ್ತಿನಲ್ಲಿ ಕನ್ನಡ ಮೂಲೆಗುಂಪಾಗುತ್ತಿದೆ. ಇದರಿಂದ ಮನೆ, ಮನ, ಸಮಾಜದಲ್ಲಿ ಇಂಗ್ಲಿಷ್ ಕನ್ನಡದ ಕತ್ತು ಹಿಸುಕುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.