ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಪಿ ಯೋಗೀಶ್ವರ್‌ ಚಿತ್ರವಿದ್ದ ಕರಪತ್ರ, 30 ಸಾವಿರ ಸೀರೆ ವಶ

Last Updated 16 ನವೆಂಬರ್ 2019, 14:11 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ಗೋದಾಮಿನ ಮೇಲೆ ಶುಕ್ರವಾರ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಎ.ಸಿ.ವೆಂಕಟರಾಜು ಮತ್ತು ತಹಶೀಲ್ದಾರ್ ರಮೇಶ್‌ಬಾಬು ನೇತೃತ್ವದ ತಂಡ, 30 ಸಾವಿರ ಸೀರೆಗಳು ಹಾಗೂ ಬಿಜೆಪಿ ಮುಖಂಡ ಸಿ.ಪಿ. ಯೋಗೀಶ್ವರ್ ಭಾವಚಿತ್ರವಿರುವ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಗರಾಜು ಎಂಬುವವರಿಗೆ ಸೇರಿದ ಈ ಗೋದಾಮನ್ನು ಜಯರಾಮ ಎಂಬುವವರು ಅ. 15ರಿಂದ ನ.15ರವರೆಗೆ ಬಾಡಿಗೆಗೆ ಪಡೆದಿದ್ದರು. ಇಲ್ಲಿ 425 ಚೀಲಗಳಲ್ಲಿ ಒಟ್ಟು 30 ಸಾವಿರ ಸೀರೆಗಳನ್ನು ಸಂಗ್ರಹಿಸಲಾಗಿತ್ತು.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಂದರ್ಭದಲ್ಲಿ ಹಂಚುವುದಕ್ಕಾಗಿ, ಇಲ್ಲಿ ಸೀರೆಗಳನ್ನು ಇಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್ ರಮೇಶ್‌ಬಾಬು ಅವರು ಗೋದಾಮಿನ ಮಾಲೀಕ ನಾಗರಾಜು ಹಾಗೂ ಎಂ.ಕೆ.ಜಯರಾಮ ಎಂಬುವವರ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT