ಸೆ. 20ರಂದು ಬೆಳಿಗ್ಗೆ ಸಾಮಾಗ್ರಿಗಳನ್ನು ಬಾಗಲಕೋಟೆಯ ಗೋವಿನಕೊಪ್ಪಕೆ ಸಾಗಿಸಲಾಗುವುದು. 21ರಂದು ಸಂತ್ರಸ್ತರಿಗೆ ವಿತರಿಸಲಾಗುವುದು. ನಾಲ್ಕು ಕ್ಲಬ್ಗಳ ಪದಾಧಿಕಾರಿಗಳು ಈ ಕಾರ್ಯಕ್ಕಾಗಿ ಬಾಗಲಕೋಟೆಗೆ ತೆರಳುವರು ಎಂದು ಹೇಳಿದರು.
ದಿ ಕಾಸ್ಮೋಪಾಲಿಟಿನ್ ಕ್ಲಬ್, ಒಂಟಿಕೊಪ್ಪಲ್ ಕ್ಲಬ್, ವಿಜಯನಗರ ಸ್ಪೋರ್ಟ್ಸ್ಕ್ಲಬ್ ಮತ್ತು ದಿ ಹೆರಿಟೇಜ್ಕ್ಲಬ್ಗಳು ಮೈಸೂರು ನಗರ ಕ್ಲಬ್ಗಳ ವೇದಿಕೆಯ ಸದಸ್ಯತ್ವ ಪಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಒಂಟಿಕೊಪ್ಪಲ್ ಕ್ಲಬ್ ಅಧ್ಯಕ್ಷ ವಿ.ಸಿ.ಪ್ರಕಾಶ್, ಕಾರ್ಯದರ್ಶಿ ಸುಬ್ರಮಣ್ಯ, ದಿ ಕಾಸ್ಮೋಪಾಲಿಟಿನ್ ಕ್ಲಬ್ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯದರ್ಶಿ ಎಚ್.ಎನ್.ಜಯಪಾಲ್, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟಿ.ಗಿರೀಶ್ ಪ್ರಸಾದ್, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಸುದ್ದಿಗೋಷ್ಠಿಯಲ್ಲಿದ್ದರು.