ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಜೋಶಿ ಬೇಜಾವಾಬ್ದಾರಿಯಿಂದ ಮಾತಾಡಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿಗೆ ಭಯ ಸೃಷ್ಟಿಯಾಗಿದೆ. ಬಿಜೆಪಿ ಭ್ರಮೆಯಲ್ಲಿ ಮುಳುಗಿದ್ದು, ಜನರನ್ನೂ ಭ್ರಮೆಯಲ್ಲಿ ಮುಳುಗಿಸಿದೆ’ ಎಂದು ಆರೋಪಿಸಿದರು.