’ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮಶೇಖರ್, ವಿಶ್ವನಾಥ್ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದರು. ದಿನ ಕಳೆದಂತೆ ಮೈಸೂರಿನ ಹಿಡಿತ ಸಾಧಿಸಿದ ಸಚಿವರು, ‘ಹಳ್ಳಿಹಕ್ಕಿ’ಯನ್ನು ದೂರವಿಡಲಾರಂಭಿಸಿದರು. ಇದೀಗ ತಮ್ಮದೇ ಪಟಾಲಂ ಮೂಲಕ ಅಧಿಕಾರ ಚಲಾಯಿಸುತ್ತಿರುವುದು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣ’ ಎನ್ನುತ್ತವೆ ಅವರ ಆಪ್ತ ವಲಯದ ಮೂಲಗಳು.