ಪ್ರತಿಭಟನಾನಿರತರಾಗಿದ್ದ ಸಕ್ಕುಬಾಯಿ ಮಾತನಾಡಿ, ‘ಡಯಾಲಿಸಿಸ್ಗೆ ಒಳಗಾದ ಒಬ್ಬರಲ್ಲಿ ‘ಹೆಪಾಟೈಟಿಸ್ ಸಿ’ ಸೋಂಕು ಇತ್ತು. ಅವರ ರಕ್ತ ಪರೀಕ್ಷೆ ನಡೆಸದೇ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಎಲ್ಲರಿಗೂ ಡಯಾಲಿಸಿಸ್ ಮಾಡಿದ್ದರಿಂದ 30 ಮಂದಿಗೆ ಸೋಂಕು ಹರಡಿದೆ. ಚಂದ್ರು ಎಂಬುವವರು ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.