ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಯನ್ನು ಸಂಪರ್ಕಿಸುವ ಸಲುವಾಗಿ ತಯಾರಾಗುತ್ತಿರುವ ‘ಚಾರ್ ಧಾಮ್’ ಯೋಜನೆಯ ಸುರಂಗ ಮಾರ್ಗಕ್ಕೆ ₹1,384 ಕೋಟಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸುರಂಗವು ಎರಡು ಪಥದ್ದಾಗಿದ್ದು, 4.5 ಕಿ.ಮೀ ಉದ್ದವಿದೆ. ಧರಸುವಿನಿಂದ ಯಮುನೋತ್ರಿಯ ನಡುವಿನ ಅಂತರವು ಈ ಸುರಂಗದಿಂದಾಗಿ 20ಕಿ.ಮೀ. ಕಡಿಮೆಯಾಗಲಿದ್ದು, ಪ್ರಯಾಣದ ಅವಧಿಯನ್ನು ಸುಮಾರು ಒಂದು ಗಂಟೆ ಕಡಿಮೆ ಮಾಡಲಿದೆ.