ಈ ವೇಳೆ ಮಾತನಾಡಿದ ಒಕ್ಕೂಟದ ಮೈಸೂರು ವಿಭಾಗದ ಮುಖಂಡ ವಿಶ್ವನಾಥ್, ‘ಗುರುವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಯಲ್ಲಿ ಸರ್ಕಾರ ನಮ್ಮನ್ನು ಅಕ್ಷರಶಃ ನಾಯಿಗಳಂತೆ ಎಳೆದೊಯ್ದು ಬಂಧಿಸಿತು. ಅಂದೇ ಮಾತುಕತೆ ನಡೆಸಿದ್ದರೆ, ಕನಿಷ್ಠ ಮನವಿ ಸ್ವೀಕರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಕ್ಕೂಟದ ಮುಖಂಡರನ್ನು ಬಂಧಿಸಿದ್ದು, ಎಲ್ಲ ಸಿಬ್ಬಂದಿಯನ್ನು ಕೆರಳಿಸಿದೆ. ಸ್ವಇಚ್ಛೆಯಿಂದ ಪ್ರತಿಭಟನೆಗೆ ಬಂದಿದ್ದಾರೆ’ ಎಂದು ತಿಳಿಸಿದರು.