ಕುಮಾರವ್ಯಾಸ ಭಾರತ ಕಾವ್ಯದ ಮೊದಲ ಆವೃತ್ತಿಯನ್ನು ಹೊರತಂದ ಕೀರ್ತಿ ಹನುಮಂತಯ್ಯ ಅವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಅವರೇ ಸ್ಥಾಪಿಸಿದರು. ಈಗಿನ ಎಷ್ಟೋ ವಿಮರ್ಶಕರು, ಕುಮಾರವ್ಯಾಸ ವಾಚಾಳಿ, ಕಾವ್ಯದಲ್ಲಿ ಅನವಶ್ಯಕ ಪುನರಾವರ್ತನೆ, ವಿವರ, ರೂಪಕ ಬಳಸಿದ್ದಾರೆ ಎಂದುನಕಾರಾತ್ಮಕವಾಗಿ ವಿಮರ್ಶೆ ಮಾಡುತ್ತಾರೆ. ಈ ರೀತಿಯ ತಾಂತ್ರಿಕ ವಿಚಾರಗಳನ್ನು ದೊಡ್ಡದು ಮಾಡುವುದಕ್ಕಿಂತ, ಕಾವ್ಯದ ರಸವನ್ನು ಆಸ್ವಾದಿಸಬೇಕು ಎಂದು ಸಲಹೆ ನೀಡಿದರು.