ಇಲ್ಲಿನ ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಹಾಸನ– ಮೈಸೂರು ರಾಜ್ಯ ಹೆದ್ದಾರಿ ಸೇತುವೆ ಬಳಿ ಭಾನುವಾರ ಸಂಜೆ ಮರಿಗೌಡ ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಕುರಿಗಳು ಹಳಿಗಳ ಬಳಿಗೆ ಹೋಗಿದ್ದನ್ನು ಗಮನಿಸಿದ ಮರಿಗೌಡ, ಅವುಗಳನ್ನು ಓಡಿಸಲು ಸೇತುವೆ ಮೇಲಿನಿಂದ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಆಗ ಆಯತಪ್ಪಿ ಕೆಳಗೆ ಬಿದ್ದ ಮರಿಗೌಡ ಅವರ ಮೇಲೆ ರೈಲು ಹರಿದಿದೆ. ಹೀಗಾಗಿ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.