ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಮೂಗಿಗೆ ನಿಂಬೆ ಹಣ್ಣಿನ ರಸ–ವಿಜಯ ಸಂಕೇಶ್ವರ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ ಸಿಂಹ

Last Updated 29 ಏಪ್ರಿಲ್ 2021, 7:41 IST
ಅಕ್ಷರ ಗಾತ್ರ

ಮೈಸೂರು: ‘ಮೂಗು ಕಟ್ಟಿದ್ದರೆ, ಉಸಿರಾಟ ತೊಂದರೆ ಇದ್ದರೆ ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳಿ ಎಂದಷ್ಟೆ ವಿಜಯ ಸಂಕೇಶ್ವರ್‌ ಹೇಳಿದ್ದಾರೆ. ಕೊರೊನಾಗೆ ಚಿಕಿತ್ಸೆ ಎಂಬುದಾಗಿ ಅವರೆಲ್ಲೂ ಹೇಳಿಲ್ಲ. ಇದರಲ್ಲಿ ಹುಳುಕು ಹುಡುಕುವಂಥದ್ದು ಏನಿದೆ’ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು.

‘ವಿಜಯ ಸಂಕೇಶ್ವರ್‌ ಅವರು 50 ಸಾವಿರ ಮಂದಿಗೆ ಉದ್ಯೋಗ ನೀಡಿರುವ ಧೀಮಂತ ವ್ಯಕ್ತಿ. ದಾನಿ ಕೂಡ. ಅವರ ಬಗ್ಗೆ ಮಾತನಾಡುವವರಿಗೂ ಯೋಗ್ಯತೆ ಇರಬೇಕು. ಸಂಕೇಶ್ವರ್‌ ಯಾವಾಗಲೂ ಜವಾಬ್ದಾರಿಯುವಾಗಿ ಮಾತನಾಡುತ್ತಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಸೂರ್ಯ ಇದ್ದಂತೆ. ಯಾರಾದರೂ ಆ ಸೂರ್ಯನೆಡೆಗೆ ಮುಖಮಾಡಿ ಉಗಿದರೆ ಅದು ಅವರ ಮೇಲೆಯೇ ಬೀಳಲಿದೆ’ ಎಂದು ಟೀಕಾಕಾರಿಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT