ಮೈಸೂರು: ‘ಮೂಗು ಕಟ್ಟಿದ್ದರೆ, ಉಸಿರಾಟ ತೊಂದರೆ ಇದ್ದರೆ ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳಿ ಎಂದಷ್ಟೆ ವಿಜಯ ಸಂಕೇಶ್ವರ್ ಹೇಳಿದ್ದಾರೆ. ಕೊರೊನಾಗೆ ಚಿಕಿತ್ಸೆ ಎಂಬುದಾಗಿ ಅವರೆಲ್ಲೂ ಹೇಳಿಲ್ಲ. ಇದರಲ್ಲಿ ಹುಳುಕು ಹುಡುಕುವಂಥದ್ದು ಏನಿದೆ’ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು.
‘ವಿಜಯ ಸಂಕೇಶ್ವರ್ ಅವರು 50 ಸಾವಿರ ಮಂದಿಗೆ ಉದ್ಯೋಗ ನೀಡಿರುವ ಧೀಮಂತ ವ್ಯಕ್ತಿ. ದಾನಿ ಕೂಡ. ಅವರ ಬಗ್ಗೆ ಮಾತನಾಡುವವರಿಗೂ ಯೋಗ್ಯತೆ ಇರಬೇಕು. ಸಂಕೇಶ್ವರ್ ಯಾವಾಗಲೂ ಜವಾಬ್ದಾರಿಯುವಾಗಿ ಮಾತನಾಡುತ್ತಾರೆ’ ಎಂದರು.