ಗ್ರಾಮದ ಸಿದ್ಧಮಲ್ಲಪ್ಪ ಅವರು ಕುರಿಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದರು. ಈ ವೇಳೆ ಇವರ ಸಾಕು ನಾಯಿಯು ಗುಡ್ಡದಲ್ಲಿ ಬಿದ್ದಿದ್ದ ವಸ್ತುವನ್ನು ಹಲ್ಲಿನಿಂದ ಕಡಿಯಿತು. ಆಗ ಸ್ಫೋಟಗೊಂಡು ಮೃತಪಟ್ಟಿತು. ಯಾರೋ ವನ್ಯಜೀವಿಗಳನ್ನು ಬೇಟೆಯಾಡಲು ಸಿಡಿಮದ್ದನ್ನು ಕಾಗದದಲ್ಲಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.