ಈ ವೇಳೆ ಮಾತನಾಡಿದ ಭಾರತೀಯ ಗೋಪರಿವಾರದ ಜಿಲ್ಲಾ ಸಂಯೋಜಕ ರಾಕೇಶ್ಭಟ್, ‘ಸಂಕ್ರಾಂತಿ ಎನ್ನುವುದು ಸುಗ್ಗಿ ಹಬ್ಬ. ಕಣ ಮತ್ತು ಗೋವುಗಳ ಪೂಜೆ ಮಾಡುವ ಮೂಲಕ ಪ್ರಕೃತಿಗೆ ಗೌರವ ಸಲ್ಲಿಸುವುದು ಹಿಂದಿನ ಆಚರಣೆ. ಈ ಆಚರಣೆ ಇತ್ತೀಚಿನ ದಿನಗಳಲ್ಲಿ ಅಳಿದು ಹೋಗುತ್ತಿದೆ. ಇದನ್ನು ಉಳಿಸುವ ಸಲುವಾಗಿ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು’ ಎಂದು ತಿಳಿಸಿದರು.