ಹನೂರು ತಾಲ್ಲೂಕಿನ ಬೆಳ್ತೂರಿನಿಂದ ಬಂದಿದ್ದ ಕೆಂಪರಾಜು ಮಾತನಾಡಿ, ‘ಪ್ರತಿ ವರ್ಷ ಮಹಾಲಯ ಅಮಾವಾಸ್ಯೆಯ ಎಣ್ಣೆಮಜ್ಜನದ ದಿನದಂದು ಕುಟುಂಬ ಸಮೇತರಾಗಿ ಬರುತ್ತೇವೆ. ಊರಿನಿಂದ ತಂದ ಉರಿಗಡಲೆಯನ್ನು ಮಾದಪ್ಪನ ಬಳಿ ಇಟ್ಟು ಪೂಜೆ ಸಲ್ಲಿಸುತ್ತೇವೆ. ಬಳಿಕ, ಎಲ್ಲರಿಗೂ ಹಂಚುತ್ತೇವೆ. ಇದರಿಂದ ನಮ್ಮ ಕಷ್ಟಗಳು ಪರಿಹಾರ ಆಗುತ್ತವೆ’ ಎಂದು ತಿಳಿಸಿದರು.