ಆದರೆ, ಮದುವೆ ಮಂಟಪದತ್ತ ಹೆಚ್ಚಾಗಿ ಜನರು ಸುಳಿಯಲಿಲ್ಲ. ‘1,500 ಮಂದಿಗೆ ಅಡುಗೆ ಮಾಡಿಸಿದ್ದೆವು. ಮಧ್ಯಾಹ್ನ 1 ಗಂಟೆಯವರೆಗೆ ಕೇವಲ 300 ಮಂದಿ ಮಾತ್ರ ಬಂದಿದ್ದಾರೆ. ಚುನಾವಣೆ ಘೋಷಣೆಯಾಗುವುದಕ್ಕೆ ಮುಂಚೆಯೇ ಕಲ್ಯಾಣ ಮಂಪಟವನ್ನು ಕಾಯ್ದಿರಿಸಿದ್ದೆವು. ಭದ್ರತಾ ಕಾರಣಗಳಿಗೆ ಜನರು ಬರುವುದಕ್ಕೆ ಇದು ತೊಡಕಾಗುತ್ತಿದೆ’ ಎಂದು ವಧುವಿನ ಸಂಬಂಧಿಕರಾದ ರಾಜಾರಾಂ ತಿಳಿಸಿದರು.