‘ಕೋಮು ಸಾಮರಸ್ಯಕ್ಕೆ ಹಲವು ಅಡೆತಡೆಗಳು ಎದುರಾಗುತ್ತಿರುವ ಹೊತ್ತಿನಲ್ಲಿ ನಡೆದಿರುವ ಮದುವೆ ಕರ್ನಾಟಕದ ಮಟ್ಟಿಗೆ ಪ್ರಮುಖ ಘಟನೆ. ಸಾಮಾಜಿಕ ಸಾಮರಸ್ಯ ಮತ್ತು ದಾಂಪತ್ಯ ಸಾಮರಸ್ಯಕ್ಕೆ ದಂಪತಿಯು ಮಾದರಿಯಾಗಲಿ. ಅವರಿಗೆ ಎಲ್ಲರ ಬೆಂಬಲ ದೊರಕಲಿ’ ಎಂದು ಕನ್ನಡ ಪರ ಹೋರಾಟಗಾರ ಪ.ಮಲ್ಲೇಶ್, ಎಐಯುಟಿಯುಸಿ ಮುಖಂಡ ಶೇಷಾದ್ರಿ, ಲೇಖಕಿ ಲತಾ, ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್ ಪ್ರತಿಪಾದಿಸಿದರು.