ಶಿವಶಂಕರ್ ಮತ್ತು ಉಮಾ ದಂಪತಿಯ ಪುತ್ರ ಸಂಜಯಕುಮಾರ್ ಅವರನ್ನು ಮೇದಿನಿ ಮಠದ ಶಿವಲಿಂಗಸ್ವಾಮೀಜಿ ಕಿರಿಯಶ್ರೀಗಳನ್ನಾಗಿ ವಿಧ್ಯುಕ್ತವಾಗಿ ಸ್ವೀಕರಿಸಿದರು. ಬಿದರಚೌಕಿಮಠದ ಗುರುಸಿದ್ಧಸ್ವಾಮೀಜಿ, ವೀರಪ್ಪ ಒಡೆಯರ ಹುಂಡಿಯ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹಣಕೊಳ ಶ್ರೀಮಠದ ಚಿದ್ಘನ ಶಿವಾಚಾರ್ಯಸ್ವಾಮೀಜಿ ಹಾಗೂ ಹರಳೂರಿನ ಶಿವಕುಮಾರಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.