ಸಚಿವರ ಜತೆಯಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ‘ಜಾಗ ಇಲ್ಲದವರಿಗೆ ನಿವೇಶನ ನೀಡುತ್ತೇವೆ. ನಂತರ ಮನೆ ಕಟ್ಟಿಕೊಳ್ಳಲು ಅನುದಾನ ಒದಗಿಸುತ್ತೇವೆ. ಸರ್ಕಾರದ ವಿವಿಧ ಅನುದಾನವನ್ನು ಇದಕ್ಕೆ ಜೋಡಿಸುವ ಯತ್ನ ನಡೆದಿದೆ. ನಿರ್ಮಾಣಗೊಳ್ಳುವ ಪ್ರತಿ ಮನೆಗೂ ಜಿಪಿಎಸ್ ಅಳವಡಿಸಿ, ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.