ಮೈಸೂರಿನ ಸುತ್ತೂರು ಮಠದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ‘ಯಡಿಯೂರಪ್ಪ ಹುಟ್ಟು ಹೋರಾಟಗಾರ. ಅವರ ವಿರುದ್ಧ ಒಂದೆರಡು ಸಲ ಏನಾದರೂ ಟೀಕೆ ಮಾಡಬಹುದು. ಪ್ರತಿದಿನವೂ ಮಾಧ್ಯಮಗಳ ಮುಂದೆ ನಿಂತು ಅವರ ವಿರುದ್ಧ ಮಾತನಾಡುವುದೆಂದರೆ ಏನಿದರ ಅರ್ಥ? ಸ್ವಲ್ಪನಾದರೂ ಕಾಮನ್ಸೆನ್ಸ್ ಇರಬೇಕು. ಮುಖ್ಯಮಂತ್ರಿ ವಿರುದ್ಧ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಅಸಮಾಧಾನ ಇದ್ದರೆ ಪಕ್ಷದ ಸಭೆಯಲ್ಲಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.