ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾಹಿತಿ ಕೊರತೆಯಿಂದ ರೋಹಿಣಿ ಸಿಂಧೂರಿ ಅವರು ಶಾಸಕರ ವಿರುದ್ಧ ಭೂ ಕಬಳಿಕೆ ಆಪಾದನೆ ಮಾಡಿದ್ದಾರೆ. ಅವರ ಆರೋಪದ ಬಗ್ಗೆ ಸರ್ಕಾರ ವರದಿ ಪಡೆದಿದೆ. ಈಗಿನ ಜಿಲ್ಲಾಧಿಕಾರಿಯೇ ವರದಿ ನೀಡಿದ್ದು, ವರದಿಯಲ್ಲಿ ಸಾ.ರಾ.ಮಹೇಶ್ ಅವರು ತಪ್ಪಿತಸ್ಥರಲ್ಲ ಎಂದಿದೆ ಎಂದು ತಿಳಿಸಿದರು.