ಮಹಾರಾಜ ಕಾಲೇಜು ಮೈದಾನದಲ್ಲಿ 2016ರ ಜನವರಿಯಲ್ಲಿ ನಡೆದ ಸುತ್ತೂರು ಕ್ಷೇತ್ರದ ಶಿವರಾತ್ರಿ ರಾಜೇಂದ್ರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮೋದಿ ಅವರು ವಾಪಸ್ ತೆರಳುವಾಗ ವಿನಯ್ ಎಂಬಾತ ರಕ್ಷಣಾ ವ್ಯವಸ್ಥೆ ಬೇಧಿಸಿ ಕಾರಿಗೆ ಅಡ್ಡವಾಗಿ ಬಂದಿದ್ದ. ಇದರಿಂದ ಸುಮಾರು 20 ಸೆಕೆಂಡ್ಗಳಷ್ಟು ಕಾಲ ಪ್ರಧಾನಿಯವರ ಸಂಚಾರದಲ್ಲಿ ವಿಳಂಬವಾಗಿತ್ತು. ಸದ್ಯ, ಈತನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.