ಘಟನೆ ವಿವರ: ರಶ್ಮಿ ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿಯ ಡಿಸಿಸಿ ಬ್ಯಾಂಕ್ ಉದ್ಯೋಗಿ. ಸಾಲ ಮಾಡಿಕೊಂಡು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸೋಮವಾರ ಬೆಳಿಗ್ಗೆ ನಂಜನಗೂಡಿಗೆ ಹೋಗಿದ್ದಾರೆ. ಅಲ್ಲಿ ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿದ ನಂತರ, ಮಲ್ಲನಮೂಲೆ ಬಳಿ ತಾಯಿ ಅಕ್ಕಮ್ಮ, ಮಗಳು ರಶ್ಮಿ ಹಾಗೂ ಮೊಮ್ಮಗಳು ಮಿಂಚು ಕೈಯಿಗೆ ಪರಸ್ಪರ ಬಟ್ಟೆ ಕಟ್ಟಿಕೊಂಡು ಕಪಿಲಾ ನದಿಗೆ ಹಾರಿದರು. ದಡದಲ್ಲಿದ್ದ ದನಗಾಹಿ ಬಸವನಪುರದ ಮಹದೇವ ಎಂಬಾತ ನದಿಗೆ ಹಾರಿದ ಮೂವರನ್ನೂ ದಡಕ್ಕೆ ಎಳೆದು ತಂದಿದ್ದಾರೆ, ಅಷ್ಟರಲ್ಲಾಗಲೇ ರಶ್ಮಿ ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅಕ್ಕಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸತ್ತಿದ್ದಾರೆ. ಮೊಮ್ಮಗಳು ಮಿಂಚು ಬದುಕುಳಿದಿದ್ದಾಳೆ.