ಮೈಸೂರಿನಲ್ಲಿ ಹಲವು ಯತಿಗಳು, ರಾಜವಂಶಸ್ಥರು ಇದ್ದಾರೆ. ಅವರೆಲ್ಲರಿಗೂ ಗೌರವ ಕೊಡುವ ಕೆಲಸವನ್ನು ನಾವು ಹಿಂದಿನಿಂದಲೂ ಮಾಡುತ್ತಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ರಾಜವಂಶಸ್ಥರ ಬಗ್ಗೆ ಹಿಂದೆ ಹಲವು ಬಾರಿ ಉದ್ದಟತನದಿಂದ ಮಾತನಾಡಿದ್ದರು. ಅವರು ಮಹಾರಾಜರ ಬಗ್ಗೆ ನಿಕೃಷ್ಟವಾಗಿ ಮಾತನಾಡಿದಾಗ ಪ್ರತ್ಯುತ್ತರ ಕೊಟ್ಟವನು ನಾನೊಬ್ಬನೇ ಹೊರತು ಮೈಸೂರಿನ ಯಾವ ರಾಜಕಾರಣಿಯೂ ಧ್ವನಿ ಎತ್ತಿರಲಿಲ್ಲ. ಮಹಾರಾಜರ ಕುಟುಂಬಕ್ಕೆ ಅತಿ ಹೆಚ್ಚು ಅವಮಾನ ಮಾಡಿದವರು ಸಿದ್ದರಾಮಯ್ಯ. ಮಹಾರಾಜರು ವಾಸ ಮಾಡುವ ಅರಮನೆ ಕಿತ್ತುಕೊಳ್ಳಲು ಪ್ರಯತ್ನ ಮಾಡಿದವರು ಯಾರು? ಅವರಿಗೆ ಕಿರುಕುಳ ಕೊಟ್ಟವರಾರು? ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದವರಾರು? ಎಂದು ವಾಗ್ದಾಳಿ ನಡೆಸಿದರು.