ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುಲಕ ಕಾರಣಕ್ಕೆ ಜಗಳ; ಕೊಲೆಯಲ್ಲಿ ಅಂತ್ಯ

Last Updated 5 ಏಪ್ರಿಲ್ 2020, 9:29 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ರಾಜೂರು ಗ್ರಾಮದಲ್ಲಿ ಶನಿವಾರ ಜಮೀನಿಗೆ ಹೋಗಲು ದಾರಿ ಬಿಟ್ಟುಕೊಡುವ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಗ್ರಾಮದ ರಮೇಶ್ (54) ಕಪಾಳಕ್ಕೆ ಏಟು ತಿಂದು ಸ್ಥಳದಲ್ಲಿ ಮೃತಪಟ್ಟವರು.

ಜಮೀನಿಗೆ ಎತ್ತಿನ ಗಾಡಿ ತೆರಳಲು ದಾರಿ ಬಿಟ್ಟುಕೊಡುವ ವಿಚಾರಕ್ಕೆ 4 ಮಂದಿಯ ನಡುವೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರಮೇಶ್ ಅವರಿಗೆ ಪತ್ನಿ ಹಾಗೂ 4 ಮಕ್ಕಳು ಇದ್ದಾರೆ. ಇವರ ಸೋದರ ಮಹದೇವ ಪೊಲೀಸ್ ಠಾಣೆಯಲ್ಲಿ ಗ್ರಾಮದ ಅಶೋಕ, ಪ್ರದೀಪ, ಚೇತನ ಎಂಬುವರ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಹುಲ್ಲಹಳ್ಳಿ ಪಿ.ಎಸ್.ಐ. ಸುಧೀಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT