ನಂಜನಗೂಡು: ತಾಲ್ಲೂಕಿನ ರಾಜೂರು ಗ್ರಾಮದಲ್ಲಿ ಶನಿವಾರ ಜಮೀನಿಗೆ ಹೋಗಲು ದಾರಿ ಬಿಟ್ಟುಕೊಡುವ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಗ್ರಾಮದ ರಮೇಶ್ (54) ಕಪಾಳಕ್ಕೆ ಏಟು ತಿಂದು ಸ್ಥಳದಲ್ಲಿ ಮೃತಪಟ್ಟವರು.
ಜಮೀನಿಗೆ ಎತ್ತಿನ ಗಾಡಿ ತೆರಳಲು ದಾರಿ ಬಿಟ್ಟುಕೊಡುವ ವಿಚಾರಕ್ಕೆ 4 ಮಂದಿಯ ನಡುವೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಮೇಶ್ ಅವರಿಗೆ ಪತ್ನಿ ಹಾಗೂ 4 ಮಕ್ಕಳು ಇದ್ದಾರೆ. ಇವರ ಸೋದರ ಮಹದೇವ ಪೊಲೀಸ್ ಠಾಣೆಯಲ್ಲಿ ಗ್ರಾಮದ ಅಶೋಕ, ಪ್ರದೀಪ, ಚೇತನ ಎಂಬುವರ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಹುಲ್ಲಹಳ್ಳಿ ಪಿ.ಎಸ್.ಐ. ಸುಧೀಂದ್ರ ತಿಳಿಸಿದ್ದಾರೆ.