ಮಹಾರಾಜರ ಅಭಿಮಾನಿ ಬಳಗ, ಸಂಗೀತಾಸಕ್ತರು, ಕಲಾರಾಧಕರು ಜಯಚಾಮರಾಜರ ಜನ್ಮಶತಮಾನೋತ್ಸವದ ಅಂಗವಾಗಿಯೇ ಆಯೋಜಿಸಿದ್ದ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಣ್ತುಂಬಿಕೊಂಡು, ಸಂಗೀತ ಆಲಿಸಿ ಕರ್ಣಾನಂದಪಟ್ಟರು. ಅರಮನೆ, ದಸರಾ ವೀಕ್ಷಣೆಗಾಗಿ ಬಂದಿರುವ ವಿದೇಶಿಗರೂ ಸಮಾರಂಭಕ್ಕೆ ಹಾಜರಾಗಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸಂಗೀತ–ನೃತ್ಯವನ್ನು ಸೆರೆ ಹಿಡಿದಿದ್ದು ವಿಶೇಷವಾಗಿತ್ತು.