‘ದಾಸ್ತಾನಿಡಲು ಕೋರಿದ್ದ ಪಡಿತರ ಅಕ್ಕಿ, ಗೋಧಿಗೆ ಹುಳು ಹಿಡಿಯದಂತೆ ಔಷಧ ಸಿಂಪಡಿಸಲಾಗಿತ್ತು. ಆದರೂ ಸಹ ಪಡಿತರ ಹಾಳಾಗಿದೆ. ಈ ಬಗ್ಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರೇಗೌಡ ತಿಳಿಸಿದ್ದಾರೆ.