ಇದೇ ಸಂದರ್ಭ ಕಿಡಿಗೇಡಿಗಳನ್ನು ಬಂಧಿಸಲು ಶ್ವಾನದಳದ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಲಾಯಿತು. ಆದರೂ ಕಿಡಿಗೇಡಿಗಳು ಪತ್ತೆಯಾಗಲಿಲ್ಲ. ನಂತರ ಪೊಲೀಸರು ಪ್ರತಿಮೆಯ ಬಳಿ ನಾಲ್ಕು ಕಡೆಗಳಿಂದ ಸಿಸಿ ಕ್ಯಾಮರಾವನ್ನು ಅಳವಡಿಸಲಾಯಿತು. ಸರಗೂರು ಉಪ ತಹಸೀಲ್ದಾರ್ ಸುನೀಲ್, ಎಚ್.ಡಿ.ಕೋಟೆ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಸರಗೂರು ಪಿಎಸ್ಐ ಪುಟ್ಟರಾಜು, ಕೆಂಡಗಣ್ಣಸ್ವಾಮಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.