ನಾಗರಹೊಳೆ ಹುಲಿ ಸಂರಕ್ಷಣೆ ಪ್ರದೇಶವಾದ ಹಿನ್ನೆಲೆಯಲ್ಲಿ ಕಾಡಿನೊಳಗೆ ಅನ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲದ್ದರಿಂದ ಗಜಪಯಣದ ಆರಂಭ ಬಿಂದು ಮೂರ್ಕಲ್ ನಿಂದ ವೀರನಹೊಸಹಳ್ಳಿ ವಲಯಕ್ಕೆ ವರ್ಗಾವಣೆಗೊಂಡಿತು. ಕಾಲ ಕ್ರಮೇಣ ಇಲಾಖೆ ನಿಯಮಗಳು ಗಟ್ಟಿಯಾಗುತ್ತಿದ್ದಂತೆ ವೀರನಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಗಜಪಯಣ ಈಗ ನಾಗರಹೊಳೆ ಅರಣ್ಯದಂಚಿನ ಮುಖ್ಯದ್ವಾರದ ಹೊರಭಾಗ ದಲ್ಲಿ ಆಚರಿಸಲು ಸೀಮಿತಗೊಂಡಿದೆ. ಮೂರ್ಕಲ್ ಗಣಪನಗುಡಿ ಅನಾಥವಾಗಿ ಪಾಳುಬಿದ್ದಿದೆ.