ಮಳೆಯಾದಾಗ ನಗರದ ಹಲವೆಡೆ ಹಾಗೂ ಬೋಗಾದಿ, ಕೆ.ಹೆಮ್ಮನಹಳ್ಳಿ, ಆನಂದನಗರ, ಪರಸಯ್ಯನಹುಂಡಿ ಸಮೀಪದ ಅರ್ಪಿತ ನಗರ, ಹುಯಿಲಾಳು, ಮಾಣಿಕ್ಯಪುರ, ಸಾಹುಕಾರ್ ಹುಂಡಿ ಹಾಗೂ ಮೂಗನಹುಂಡಿ ಭಾಗದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದಿರುವುದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಪರಿಷತ್ತಿನ ಪ್ರಮುಖರು ಒತ್ತಾಯಿಸಿದರು.