ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈ ಭಾಗದ ಪಾಲಿಕೆ ಸದಸ್ಯೆ ಶಾಂತಕುಮಾರಿ, ‘ಎಲ್ಲಿಯೇ ಕೋಮು ಗಲಭೆಯಾದರೂ ಈ ಬೀದಿಯಲ್ಲಿ ಮಾತ್ರ ಶಾಂತಿ ನೆಲೆಸಿರುತ್ತದೆ. ಇಲ್ಲಿ ಕೆಲವೇ ಹಿಂದೂ ಕುಟುಂಬಗಳು ವಾಸವಿದ್ದು, ಉಳಿದವರೆಲ್ಲರೂ ಮುಸ್ಲಿಮರೇ. ಹಿಂದಿನಿಂದಲೂ ಎರಡೂ ಧರ್ಮದವರ ನಡುವೆ ಸಾಮರಸ್ಯವಿದೆ. ಯಾವುದೇ ಸಮಾರಂಭವಿದ್ದರೂ ಎಲ್ಲರೂ ಒಟ್ಟಾಗಿಯೇ ಆಚರಿಸುತ್ತಾರೆ’ ಎಂದು ಹೇಳಿದರು.