ಮೈಸೂರು: ನಗರದಲ್ಲಿ ಸೋಮವಾರ ನಸುಕಿನಿಂದಲೇ ಮಳೆ ಸುರಿಯುತ್ತಿದೆ. ಹಲವು ಬಡಾವಣೆಗಳಲ್ಲಿ ಬಿರುಸಿನಿಂದ ಸುರಿದಿರುವ ಮಳೆಗೆ ಮರಗಳು ಬುಡಮೇಲಾಗಿವೆ, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.
ಇಲ್ಲಿನ ಸಿದ್ದಾರ್ಥನಗರದ ಸನ್ಮಾರ್ಗ, ಗಾಯತ್ರಿಪುರಂನ ಪೆಟ್ರೋಲ್ ಬಂಕ್ ಹಾಗೂ ಜಯನಗರದ ಬೇಡರ ಕಣ್ಣಪ್ಪ ದೇಗುಲದ ಸಮೀಪ ಮರಗಳು ಧರೆಗುರುಳಿವೆ.
ಪಡುವಾರಹಳ್ಳಿ, ವಿಜಯಶ್ರೀಪುರ,ಆಲನಹಳ್ಳಿ ಹಾಗೂ ಜಲಪುರಿಗಳ ಕೆಲವು ಮನೆಗಳಿಗೆ ನೀರು ನುಗ್ಗಿದೆ.
ಮೈಸೂರಿನ ಸಿದ್ದಾರ್ಥ ನಗರದ ವಿನಯ ಮಾರ್ಗ 8 ನೇ ಕ್ರಾಸ್ ನಲ್ಲಿ ಉರುಳಿದ ಮರವನ್ನು ಪಾಲಿಕೆಯ ರಕ್ಷಣಾ ತಂಡ ಅಭಯ್ -3 ರ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ಮೈಸೂರಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ