ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘1937ರಲ್ಲಿ ನಮ್ಮ ಮುತ್ತಾತ ಕಾಕಾಸುರ ಮಾದಪ್ಪ ಅವರು ಈ ಸಿಹಿ ತಿನಿಸನ್ನು ಅರಮನೆಯಲ್ಲಿ ತಯಾರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇದಕ್ಕೆ ‘ಮೈಸೂರು ಪಾಕ’ ಎಂದು ಹೆಸರಿಟ್ಟರು. ಇದರ ಭೌಗೋಳಿದ ಸೂಚಿತಮಿಳುನಾಡಿನ ಪಾಲಾಗುವುದಕ್ಕೆ ಬಿಡಬಾರದು. ಹಣಕ್ಕಾಗಿ ನಾನು ಅರ್ಜಿ ಹಾಕುತ್ತಿಲ್ಲ. ನಮ್ಮ ಮೈಸೂರಿನ ಹೆಮ್ಮೆ ಉಳಿಯಲಿ ಎಂದು ಹಾಕುತ್ತೇನೆ’ ಎಂದು ಹೇಳಿದ್ದಾರೆ.